JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, January 10, 2025

General knowledge Question and Answers

  Jnyanabhandar       Friday, January 10, 2025
General knowledge Question and Answers 

🏝ಪ್ರಧಾನ ಮಂತ್ರಿ ಪ್ರಶಿಕ್ಷಣಾರ್ಥಿಗಳು ಯೋಜನೆ (ಪಿಎಂ ಇಂಟರ್ನ್ಶಿಪ್ ಸ್ಕೀಮ್)ಯಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಧನ ಸಹಾಯವು ದೊರೆಯುತ್ತದೆ.?
ಉತ್ತರ:- ಒಂದು ಕೋಟಿ
🏝ಭಾರತೀಯ ಸಮಗ್ರ ಕೃಷಿ ಅಭಿವೃದ್ಧಿಗೆ ಯಾವ ಹೊಸ ವ್ಯವಸ್ಥೆಯು ಬರಲಿದೆ.?
ಉತ್ತರ:- ನ್ಯಾಷನಲ್ ಅಗ್ರಿಕಲ್ಚರ್ ಕೋಡ್
🏝'ಹೀರಿ ಹಿಪ್ಪೆ ಮಾಡು' ಎಂಬ ನುಡಿಗಟ್ಟಿನ ಅರ್ಥವೇನು.?
ಉತ್ತರ:- 'ನಿಸ್ಸಾರಗೊಳಿಸು'
🏝'ಸಮೃದ್ಧವಾದ,ಪುಷ್ಕಳವಾದ' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು.?
ಉತ್ತರ:- 'ಪಗದಸ್ತು'
🏝'ಕವಣೆಕಲ್ಲು' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು.?
ಉತ್ತರ:- ಪಗರಿ
ಅವರು ತಮ್ಮ 'ಬನವಾಸಿ' ಕೃತಿಯಲ್ಲಿ 'ಮಾನವನ ಜೀವ ಹುಳುಗಳ ಹಾಗೆ ಸಾಯುವ ಸ್ಥಿತಿಗೆ ಬಂದಿದೆ.ಅನ್ನಾನ್ನಗತಿಕವಾಗಿದೆ' ಎಂದಿದ್ದಾರೆ.ಇದರ ಅರ್ಥವೇನು?
ಉತ್ತರ:- ದರಿದ್ರ ಸ್ಥಿತಿಯನ್ನು ತಲುಪು
🚀ಕುರ್ಕ್,ಮಾಯೆರರು,ಗೋಲಾರಿ ಹೊಲೆಯರು ಮತ್ತು ಹಳಬರು ಎಂಬ ಸಮುದಾಯದವರ ಭಾಷೆಯಲ್ಲಿ ಕನ್ನಡ ಶಬ್ದಗಳಿರುವುದನ್ನು ಯಾರು ತೋರಿಸಿದರು?
ಉತ್ತರ:-ಶಂಕರ ಬಾಲದೀಕ್ಷಿತ ಜೋಶಿ
🚀ಮಾಗಡಿ ಮತ್ತು ಹುತ್ತರಿದುರ್ಗದ ಸುತ್ತಮುತ್ತಲಲ್ಲಿ 'ಕಲ್ಲುಸೇವೆ' ಎಂಬ ಶವಸಂಸ್ಕಾರವು ನಡೆಯುತ್ತಿತ್ತು.ಇದು ಯಾವ ಧರ್ಮದ ಶವಸಂಸ್ಕಾರವನ್ನು ಹೋಲುತ್ತದೆ?
ಉತ್ತರ:- ಪಾರ್ಸಿಗಳು
🚀ಕರ್ನಾಟಕದ ಯುವತಿಯರು 'ಮೋಸ ಮಾಡುವುದರಲ್ಲಿ ಸಿದ್ಧಹಸ್ತರು' ಎಂದು ಯಾರು ಹೇಳಿದ್ದಾರೆ?
ಉತ್ತರ:- ಸೋಮದೇವ ಸೂರಿ
🚀'ನನ್ನನ್ನು ನಾನು ಕಂಡಂತೆ' ಯಾರ ಆತ್ಮಕಥೆ?
ಉತ್ತರ:- ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ)
🚀'ನೆನಪಿನ ಬುತ್ತಿ'- ಯಾರ ಆತ್ಮಕಥೆ?
ಉತ್ತರ:- ದೇ.ಜವರೇಗೌಡ
🚀'ನಿರ್ಭಯಾಗ್ರಫಿ' – ಯಾರ ಆತ್ಮಕಥೆ?
ಉತ್ತರ:- ಜಿ.ಪಿ.ರಾಜರತ್ನಂ


🐠ಅಂತರ ಸಂಸತ್ತುಗಳ ಒಕ್ಕೂಟ(ಇಂಟರ್ ಪಾರ್ಲಿಮೆಂಟರಿ ಯೂನಿಯನ್) ಎಲ್ಲಿದೆ?
 -> ಜಿನೀವ
🐠'ಬಯೋ - ಪಾಲಿಮರ್' ಗಳನ್ನು ಯಾವುದರಿಂದ ತಯಾರಿಸುತ್ತಾರೆ?
-> ಜೈವಿಕ ವಸ್ತುಗಳು
🐠ಭಾರತವು ಅಮೆರಿಕಾದಿಂದ ಯಾವ ಹೊಸ ಕ್ಷಿಪಣಿಗಳನ್ನು ಕೊಳ್ಳಲು ಒಪ್ಪಂದವನ್ನು ಮಾಡಿಕೊಂಡಿದೆ?
-> ಎ.ಜಿ.ಎಂ - ಹೆಲ್‌ಫೈರ್(AGM - Hellfire)
🐠'ವೆಸ್ಟ್ ನೈಲ್ ವೈರಸ್'(West Nile virus)ಸೋಂಕು ಯಾವ ದೇಶದಲ್ಲಿ ಸಾವು ನೋವಿಗೆ ಕಾರಣವಾಗಿದೆ?
-> ಉಕ್ರೇನ್
🐠ಅಮೃತಾ,ಮನದ,ಪೂಷಾ,ಪುಷ್ಟಿ, ತುಷ್ಟಿ, ರತಿ, ಧೃತಿ ಇವೆಲ್ಲ ಏನು?
-> ಚಂದ್ರನ ಕಲೆಗಳು
🐠'ಹಾದಿಗೆ ಹಚ್ಚು' ಎಂಬ ನುಡಿಗಟ್ಟಿನ ಅರ್ಥವೇನು? 
-> ಸರಿಯಾದ ಮಾರ್ಗದಲ್ಲಿ ನಡೆಸು
🐠ಲಕ್ಷ್ಮಣನ ಎರಡನೆಯ ಮಗ ಚಂದ್ರಕೇತುವಿನ ರಾಜಧಾನಿ ಯಾವುದಾಗಿತ್ತು?
-> ಚಂದ್ರಕಾಂತ
🏝ಕರ್ನಾಟಕದ ಜನರು 'ತಾಂಬೂಲ ಪ್ರಿಯರು' ಎಂಬ ಉಲ್ಲೇಖವನ್ನು ಯಾರು ನೀಡಿದ್ದಾರೆ?
- ಜಿನಸೇನ
🏝ಕರ್ನಾಟಕದ ಇತಿಹಾಸವನ್ನು ೩೦೦೦ ವರ್ಷಕ್ಕೂ ಹಿಂದೆ ಕರೆದೊಯ್ಯುವ ಸಮಾಧಿಗಳು ಎಲ್ಲಿ ಕಂಡು ಬಂದಿವೆ?
- ಹುತ್ತರಿದುರ್ಗ
🏝ಯಾವ ಉಪನಿಷತ್ತಿನಲ್ಲಿ 'ಮಿಟಚಿ' (ಮಿಡತೆ) ಮತ್ತು 'ಚೆನ್' (ಚಂದ್ರ) ಶಬ್ದಗಳು ಕಂಡುಬರುತ್ತವೆ?
- ಛಾಂದೋಗ್ಯ ಉಪನಿಷತ್ತು
🏝2025ನೆಯ ಹೊಸ ವರ್ಷವನ್ನು ಜಗತ್ತಿನಲ್ಲಿ ಯಾವ ದೇಶವು ಮೊತ್ತ ಮೊದಲು ಆಚರಿಸುತ್ತದೆ? 
- ಕಿರಿಬಾಟಿ ದ್ವೀಪಗಳು
🏝ಯಾವ ದೇಶದಲ್ಲಿ ಹೊಸ ವರ್ಷದ ಮೊದಲ ದಿನದಂದು 12 ದ್ರಾಕ್ಷಿಗಳನ್ನು ತಿನ್ನುವ ಆಚರಣೆಯಿದೆ?
- ಸ್ಪೇನ್
🏝'ನಾಟ್ಯ ನೆನಪುಗಳು' ಯಾರ ಆತ್ಮಕಥೆ?
- ಶ್ರೀರಂಗ
🏝'ಜೀವನ ಸ್ಮರಣೆ' ಯಾರ ಆತ್ಮಕಥೆ?
- ಆಲೂರು ವೆಂಕಟರಾವ್
logoblog

Thanks for reading General knowledge Question and Answers

Previous
« Prev Post

No comments:

Post a Comment

If You Have any Doubts, let me Comment Here