JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, February 23, 2025

General Knowledge Question and Answers

  Jnyanabhandar       Sunday, February 23, 2025
General Knowledge Question and Answers 

🍂ಜೀತ ಪದ್ಧತಿ ವ್ಯವಸ್ಥೆ ನಿರ್ಮೂಲನ ಕಾಯ್ದೆ-1976ರ ಅನ್ವಯ ಕೆಳಗಿನ ಯಾವ ಹಂತಗಳಲ್ಲಿ ವಿಚಕ್ಷಣಾ ಸಮಿತಿಗಳನ್ನು ಸ್ಥಾಪಿಸಬೇಕಾಗಿದೆ?
ಉತ್ತರ :-ಜಿಲ್ಲಾ ಮಟ್ಟದಲ್ಲಿ
🍂ಯಾವ ವೇದದಲ್ಲಿ ಸಭಾ ಮತ್ತು ಸಮಿತಿ ಪ್ರಜಾಪತಿಯ ಎರಡು ಹೆಣ್ಣು ಮಕ್ಕಳು ಎಂದು ಹೇಳಲಾಗಿದೆ.?
ಉತ್ತರ :-ಅಥರ್ವಣವೇದ
🍂ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ ಬಣ್ಣಗಳನ್ನು ನಿಷೇಧಿಸಲಾಗಿದೆ.ಈ ಪಟ್ಟಿಗೆ ಸೇರ್ಪಡೆಯಾಗಿರುವ ಹೊಸ ರಾಸಾಯನಿಕ ಯಾವುದು.?
ಉತ್ತರ :-ಲಿಕ್ವಿಡ್ ನೈಟ್ರೋಜನ್
🍂ಮಹಾಭಾರತದ ಕುಂತಲ ಸಾಮ್ರಾಜ್ಯವು ಬಳ್ಳಾರಿಯ ಯಾವ ಪ್ರದೇಶ ಎನ್ನಲಾಗಿದೆ.?
ಉತ್ತರ :- ಕುರುಗೋಡು
🍂''ಗ್ಯಾಂಜೆಟಿಕ್ ಡಾಲ್ಫಿನ್'' ಯಾವ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ.?
ಉತ್ತರ :-ಉತ್ತರ ಪ್ರದೇಶ
🍂''ನ್ಯಿಶಿ ಬುಡಕಟ್ಟು'' - ಯಾವ ರಾಜ್ಯದಲ್ಲಿ ಹೆಸರುವಾಸಿ.?
ಉತ್ತರ :- ಅರುಣಾಚಲ ಪ್ರದೇಶ

🪴'ಪಂಗ್ಸಾವೋ' ಕಣಿವೆಯು ಯಾವ ಎರಡು ದೇಶಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ.
ಉತ್ತರ :- ಭಾರತ ಮತ್ತು ಮೈನ್ಮಾರ್
🪴ಏಳು ದಿನಗಳ ಉತ್ಸವವಾದ 'ಬಾಲಿಯಾತ್ರಾ', ಯಾವ ರಾಜ್ಯದಲ್ಲಿ ನಡೆಯುತ್ತದೆ
🪴ಜಗತ್ತಿನಲ್ಲಿ 
ಎಳ್ಳನ್ನು ಬೆಳೆಯುವ ದೇಶಗಳಲ್ಲಿ ಭಾರತದ ಸ್ಥಾನ ಎಷ್ಟನೆಯದು.
ಉತ್ತರ :- ಎರಡನೆಯದು
🪴'ರಾಮ್ ಸರ್' - ಒಪ್ಪಂದದ ಅನ್ವಯ, ಭಾರತದ ಯಾವ ಎರಡು ನಗರಗಳನ್ನು ತೇವಭೂಮಿಯ ನಗರಗಳು ಪಟ್ಟಿಗೆ ಸೇರಿಸಲಾಯಿತು.?
ಉತ್ತರ :- ಇಂದೋರ್ - ಉದಯಪುರ
🪴ದಕ್ಷಿಣ ಭಾರತದಲ್ಲಿರುವ ಏಕೈಕ 'ಬುಡಕಟ್ಟು ರಾಜವಂಶ' ಯಾವುದು..?
- ಮನ್ನರ್ ಬುಡಕಟ್ಟು
🎋'ಕಾಗೋಡು ಭೂ ಚಳುವಳಿ' ಆರಂಭವಾದಗ ಅದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಯಾರು.?
ಉತ್ತರ :- ಶಾಂತವೇರಿ ಗೋಪಾಲಗೌಡರು
🎋'ಗೀಲನ್ ಬರ್ಹೆ' ಲಕ್ಷಣಾವಳಿ ಈ ಖಾಯಿಲೆಯು ಇತ್ತೀಚಿಗೆ ಯಾವ ನಗರದಲ್ಲಿ ಕಾಣಿಸಿಕೊಂಡಿತ್ತು.
ಉತ್ತರ :- ಪುಣೆ
🎋ಕರ್ನಾಟಕದಲ್ಲಿ ಮೊದಲ ಬಾರಿಗೆ ಭುವನೇಶ್ವರಿಯ ವಿಗ್ರಹವನ್ನು ಎಲ್ಲಿ ಸ್ಥಾಪಿಸಲಾಗಿದೆ.
ಉತ್ತರ :ವಿಧಾನ ಸೌಧ
🎋ಅಕ್ಷರ ಪರಿಚಯವೇ ಇಲ್ಲದ ಕಾಲಘಟ್ಟವನ್ನು ಹೀಗೆಂದು ಕರೆಯಲಾಗುವುದು.?
ಉತ್ತರ :- ಪ್ರಾಗೖತಿಹಾಸಿಕ ಕಾಲ
🎋"ಒಂದು ಜನಾಂಗದ ಅಥವಾ ರಾಷ್ಟ್ರದ ಸ್ಮರಣೆಯ ಇತಿಹಾಸ" ಎಂದವರು ಯಾರು.?
ಉತ್ತರ :- ರಾಧಾಕೃಷ್ಣನ್
🎋ಭಾರತದ 'ಇತಿಹಾಸದ ಪಿತಾಮಹ' ಯಾರು.?
ಉತ್ತರ :- ಕಲ್ಲಣ

🎋'ಸಿಲಪ್ಪದಿಗಾರಮ್' - ಎಂಬ ಪ್ರಾಚೀನ ತಮಿಳು ಮಹಾಕಾವ್ಯದ ಕಥಾನಾಯಕಿ ಯಾರು.?
ಉತ್ತರ :- ಕಣ್ಣಗಿ
🎋ಕರ್ನಾಟಕದ ನೂತನ ಕೖಗಾರಿಕಾ ನೀತಿಯ ವರ್ಷ.?
ಉತ್ತರ :- 2025-2030
🎋2025ನೇ ಸಾಲಿನ ಪದ್ಮ ಪುರಸ್ಕಾರ ಎಷ್ಟು ಜನರಿಗೆ ನೀಡಲಾಗಿದೆ.?
ಉತ್ತರ :- 139
'ವೖಟ್ ಲಂಗ್ ಸಿಂಡ್ರೋಮ್' ಕಾಯಿಲೆಗೆ ಯಾವ ಜೀವಿಯು ಕಾರಣ.?
ಉತ್ತರ :- ಬ್ಯಾಕ್ಟೀರಿಯಾ
🎋ವಿಶ್ವಸಂಸ್ಥೆಯ 'ಭದ್ರಾತಾ ಮಂಡಳಿ'ಯಲ್ಲಿ ಸುದೀರ್ಘ ಕಾಲ ಭಾಷಣವನ್ನು ಯಾರು ಮಾಡಿದರು.?
ಉತ್ತರ :- ವಿ. ಕೆ. ಕೃಷ್ಣಮೇನನ್
🎋ಗ್ರಾನೖಟಿನಿಂದ ಕಟ್ಟಿದ ವಿಶ್ವದ ಪ್ರಥಮ ಹಾಗೂ ಬೃಹತ್ ದೇವಾಲಯವು ಯಾವುದು.?
ಉತ್ತರ :- ಬೃಹದೀಶ್ವರ ದೇವಾಲಯ

🌳ನಕ್ಷಾ ಪೈಲಟ್ ಯೋಜನೆ ಉದ್ಘಾಟನೆ

- ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಾಳೆ (ಮಂಗಳವಾರ) 26 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 152 ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯ ಭೂ-ಪ್ರಾದೇಶಿಕ ಜ್ಞಾನ-ಆಧಾರಿತ ಭೂ ಸಮೀಕ್ಷೆ (NAKSHA) ಪೈಲಟ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
- ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಭೂ ಸಂಪನ್ಮೂಲ ಇಲಾಖೆ ನೇತೃತ್ವದ ನಕ್ಷಾ ಯೋಜನೆಯು ನಗರ ಪ್ರದೇಶಗಳಲ್ಲಿ ಭೂ ಸಮೀಕ್ಷೆ ಪ್ರಕ್ರಿಯೆಗಳನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ.
- ಭೂ ದಾಖಲೆಗಳನ್ನು ರಚಿಸುವುದು ಮತ್ತು ನವೀಕರಿಸುವುದು, ಭೂ ಮಾಲೀಕತ್ವದ ನಿಖರವಾದ ದಾಖಲಾತಿಯನ್ನು ಒದಗಿಸುವುದು, ನಗರ ಯೋಜನೆಯನ್ನು ಸುಧಾರಿಸುವುದು ಮತ್ತು ಭೂ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

🍃NAKSHA ಯೋಜನೆಯ ಪ್ರಯೋಜನ?:

ನಗರ ಭೂ ವಿವಾದಗಳು ಮತ್ತು ಅಸ್ಪಷ್ಟ ಆಸ್ತಿ ದಾಖಲೆಗಳು ಭಾರತದಲ್ಲಿ ಬಹಳ ಹಿಂದಿನಿಂದಲೂ ಒಂದು ದೊಡ್ಡ ಸವಾಲಾಗಿದೆ. NAKSHA ಯೋಜನೆಯು ಮಾಲೀಕತ್ವ ಮತ್ತು ಆಸ್ತಿ ಹಕ್ಕುಗಳ ಬಗ್ಗೆ ಸ್ಪಷ್ಟತೆಯನ್ನು ಒದಗಿಸುವುದು, ಭೂ-ಸಂಬಂಧಿತ ಸಂಘರ್ಷಗಳನ್ನು ಕಡಿಮೆ ಮಾಡುವುದು, ನಗರ ನಿವಾಸಿಗಳಿಗೆ ಜೀವನ ಸುಲಭತೆಯನ್ನು ಸುಧಾರಿಸುವುದು, ಭೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ನಿಖರವಾದ ಭೂ ನಕ್ಷೆಯ ಮೂಲಕ ಸುಸ್ಥಿರ ನಗರ ಅಭಿವೃದ್ಧಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.

17-02-2025
logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here