JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, October 5, 2024

General knowledge Question and Answers

  Jnyanabhandar       Saturday, October 5, 2024
General knowledge Question and Answers 

🌸ನಡುವೆ ಸ್ವರವಿಲ್ಲದೆ ಎರಡು ಅಥವಾ ಮೂರು ವ್ಯಂಜನಗಳಿದ್ದು, ಅವುಗಳ
ಮುಂದೆ ಸ್ವರವು ಸೇರಿದ ಅಕ್ಷರವು
ಉತ್ತರ:- -'ಸಂಯುಕ್ತಾಕ್ಷರ' ಅಥವಾ 'ಒತ್ತಕ್ಷರ'  
🌸ಎರಡು ಅಕ್ಷರಗಳ ನಡುವೆ ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಚರಿಸುವುದೇ 
ಉತ್ತರ:- ಸಂಧಿ
🌸ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸುವ ಶಬ್ದಗಳನ್ನು ಹೀಗೆ ಕರೆಯುವರು 
ಉತ್ತರ:-'ತತ್ಸಮ'
🌸ಕನ್ನಡ ಮೂಲಾಕ್ಷರಗಳಲ್ಲಿರುವ ಮೂರು ಬಗೆಗಳು 
ಉತ್ತರ:- ಸ್ವರ, ವ್ಯಂಜನ, ಯೋಗವಾಹ
🌸ಸ್ವತಂತ್ರವಾಗಿ ಉಚ್ಚಾರ ಮಾಡಲು ಬರುವ ಅಕ್ಷರಗಳನ್ನು ಹೀಗೆ ಕರೆಯುವರು
ಉತ್ತರ:- ಸ್ವರಗಳು
🌸ವ್ಯಂಜನಗಳಿಗೆ ಸ್ವರಗಳನ್ನು ಅಂದರೆ ಸ್ವರ ಚಿಹ್ನೆಗಳನ್ನು ಸೇರಿಸುವುದರಿಂದ ಉಂಟಾಗುವ ಮಿಶ್ರವರ್ಣಗಳೇ
ಉತ್ತರ: -'ಗುಣಿತಾಕ್ಷರ' ಅಥವಾ 'ಕಾಗುಣಿತ'
🌸1987ರಲ್ಲಿ ಕುವೆಂಪುರವರಿಗೆ ಪಂಪ ಪ್ರಶಸ್ತಿ ತಂದು ಕೊಟ್ಟ ಕೃತಿ
ಉತ್ತರ:-'ಶ್ರೀ ರಾಮಾಯಣ ದರ್ಶನಂ'
🌸ಎ. ಎನ್. ಮೂರ್ತಿರಾವ್ ಅವರಿಗೆ 1992ರಲ್ಲಿ ಈ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ 
ಉತ್ತರ:- ದೇವರು
🌸ಜೆ. ಎಸ್. ಆಮೂರ ಅವರಿಗೆ ಪಂಪ ಪ್ರಶಸ್ತಿ ಲಭಿಸಿದ ವರ್ಷ 
ಉತ್ತರ:- 2006

🌸 ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊದಲು ಇಂಗ್ಲಿಷಿನಲ್ಲಿ ರಚಿಸಿದವರು
ಉತ್ತರ:-ಇ. ಪಿ. ರೈಸ್
🌸 ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು -
ಉತ್ತರ:- ಹೆಚ್. ವಿ. ನಂಜುಂಡಯ್ಯ
🌸 ಕನ್ನಡದ ಮೊದಲ ಕಾನೂನು ಪತ್ರಿಕೆ
ಉತ್ತರ:- ನ್ಯಾಯ ಸಂಗ್ರಹ
🌸ಚಂದ್ರಗುಪ್ತನ ಆಳ್ವಿಕೆಯ ಕೊನೆಯ ವೇಳೆಗೆ ಗುಪ್ತ ಸಾಮ್ರಾಜ್ಯವು ಇಲ್ಲಿಯವರೆಗೆ ವ್ಯಾಪಿಸಿತ್ತು
ಉತ್ತರ:-ಅಲಹಾಬಾದ್, ಔದ್ ಮತ್ತು ದಕ್ಷಿಣ ಬಿಹಾರ್ ಪ್ರಾಂತ್ಯಗಳವರೆಗೆ
🌸ಮೊದಲನೇ ಚಂದ್ರಗುಪ್ತನಿಂದ ಆರಂಭವಾದದ್ದು
ಉತ್ತರ:- ಕ್ರಿ.ಶ. 320ರಿಂದ ಆರಂಭವಾಗುವ ಗುಪ್ತಯುಗ
🌸ಮೊದಲನೇ ಚಂದ್ರಗುಪ್ತನ ಉತ್ತರಾಧಿಕಾರಿಯಾಗಿದ್ದವನು
 à²‰à²¤್ತರ:--ಸಮುದ್ರಗುಪ್ತ
🌸 ಅಲಹಾಬಾದ್ ಸ್ತಂಭ ಶಾಸನವನ್ನು ರಚಿಸಿದವನು
ಉತ್ತರ: -ಹರಿಸೇನ
🌸 ಅಲಹಾಬಾದ್ ಸ್ತಂಭ ಶಾಸನವು ಇರುವ ಭಾಷೆ ಮತ್ತು ಶೈಲಿ 
ಉತ್ತರ:-ಸಂಸ್ಕೃತ ಭಾಷೆ, ಗದ್ಯ ಮತ್ತು ಪದ್ಯಗಳಿಂದ ಕೂಡಿದ ಚಂಪೂ ಶೈಲಿ
🌸 ಡಾ. ವಿ. ಎ. ಸ್ಮಿತ್‌ರವರು ಸಮುದ್ರಗುಪ್ತನನ್ನು ಹೀಗೆ ಕರೆದಿದ್ದಾರೆ 
ಉತ್ತರ:-ಭಾರತದ ನೆಪೋಲಿಯನ್

🌸ಸಮುದ್ರಗುಪ್ತನು ಅಶ್ವಮೇಧ ಯಾಗವನ್ನು ಆಚರಿಸಿದ್ದರಿಂದ ಅವನಿಗಿದ್ದ ಬಿರುದು
ಉತ್ತರ:- ಅಶ್ವಮೇಧ ಪರಾಕ್ರಮ
🌸ಅಲಹಾಬಾದ್ ಶಾಸನವು ಸಮುದ್ರಗುಪ್ತನನ್ನು ಹೀಗೆ ವರ್ಣಿಸಿದೆ 
ಉತ್ತರ:-ಭೂಮಿಯ ಮೇಲಿನ ದೇವರೆಂದು
🌸ಸಮುದ್ರಗುಪ್ತನು ಈ ಧರ್ಮದವನಾಗಿದ್ದನು
ಉತ್ತರ: - ವೈದಿಕ ಮತದ ವೈಷ್ಣವ
🌸 ಸಮುದ್ರಗುಪ್ತನಿಗೆ ಇದ್ದ ಬಿರುದು
ಉತ್ತರ:-'ಕವಿರಾಜ' 
🌸ಸಮುದ್ರಗುಪ್ತನು ಸಂಸ್ಕೃತ ಭಾಷೆಯಲ್ಲಿ ಬರೆದ ಗ್ರಂಥ
ಉತ್ತರ:-'ಕೃಷ್ಣಚರಿತೆ'
🌸ಸಮುದ್ರಗುಪ್ತನ ನಂತರ ಅವನ ಉತ್ತರಾಧಿಕಾರಿಯಾದವನು
ಉತ್ತರ:- ರಾಮಗುಪ್ತ
🌸ಕೋನಾರ್ ನದಿಗೆ ಕೋನಾರ್ ಅಣೆಕಟ್ಟನ್ನು ನಿರ್ಮಿಸಲಾದ ಸ್ಥಳ
ಉತ್ತರ:- ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆ
🌸ದಾಮೋದರ ಯೋಜನೆಯ ಎರಡನೇ ಹಂತದ ದುರ್ಗಾಪುರದ ಒಡ್ಡು ಪೂರ್ಣಗೊಂಡ ವರ್ಷ
ಉತ್ತರ:-1955
🌸ಪಂಚೆಟ್ ಹಿಲ್‌ನ ಅಣೆಕಟ್ಟಿನ ಮುಖ್ಯ ಉದ್ದೇಶ
ಉತ್ತರ: - ಪ್ರವಾಹ ನಿಯಂತ್ರಣ
🌸ದುರ್ಗಾಪುರದ ಒಡ್ಡಿನ ಮುಖ್ಯ ಉದ್ದೇಶ
ಉತ್ತರ:- ನೀರಾವರಿ
🌸ದಾಮೋದರ ಯೋಜನೆಗೆ ಸೇರಿದ ಪ್ರಮುಖ ಶಾಖವಿದ್ಯುದಾಗಾರಗಳು 
ಉತ್ತರ:- ಬೊಕಾರೋ, ಚಂದ್ರಾಪುರ ಮತ್ತು ದುರ್ಗಾಪುರ
🌸ಭಾಕ್ರಾನಂಗಲ್ ವಿವಿಧೋದ್ದೇಶ ನದಿ ಕಣಿವೆ ಯೋಜನೆಯು ಈ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ
ಉತ್ತರ:- ಪಂಜಾಬ್, ಹರಿಯಾಣಾ ಮತ್ತು ರಾಜಸ್ಥಾನ
🌸ಭಾಕ್ರಾನಂಗಲ್ ಯೋಜನೆಯು ಪ್ರಾರಂಭಗೊಂಡ ವರ್ಷ 
ಉತ್ತರ:- 1948
🌸ಭಾಕ್ರಾನಂಗಲ್ ಯೋಜನೆಯು ಪೂರ್ಣಗೊಂಡ ವರ್ಷ
ಉತ್ತರ: - 1968
🌸ಭಾಕ್ರಾ ಮತ್ತು ನಂಗಲ್ ಎಂಬ ಅಣೆಕಟ್ಟೆಗಳನ್ನು ಈ ನದಿಗೆ ಕಟ್ಟಲಾಗಿದೆ
ಉತ್ತರ:- ಸಟ್ಲೇಜ್
🌸 ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯದ ಹೆಸರು
ಉತ್ತರ:- 'ಗೋವಿಂದ ಸಾಗರ'
🌸ಈ ನದಿಗೆ ಹಿಮಾಚಲ ಪ್ರದೇಶದ ಪೂಂಗ್ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ 
ಉತ್ತರ:- ಬಿಯಾಸ್
🌸ಭಾಕ್ರಾನಂಗಲ್‌ನ ಈ ಮುಖ್ಯ ಕಾಲುವೆಯು ರಾಜಸ್ಥಾನದ ಥಾರ್ ಮರುಭೂಮಿಯ ವರೆಗೆ ನೀರಾವರಿಯನ್ನು ಒದಗಿಸುತ್ತದೆ
ಉತ್ತರ:- ಇಂದಿರಾಗಾಂಧಿ ಕಾಲುವೆ

🌸ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತನೆ ಮಾಡುವ ಸಾಧನಗಳಿಗೆ ಹೀಗೆ ಹೇಳುತ್ತಾರೆ
ಉತ್ತರ:- ವಿದ್ಯುತ್ ಕೋಶಗಳು
🌸ಧನ ವಿದ್ಯುದ್ವಾರ, ಋಣ ವಿದ್ಯುದ್ವಾರ ಹಾಗೂ ವಿದ್ಯುತ್ ವಿಪ್ರೀಶ (ಆಮ್ಲ, ಪ್ರತ್ಯಾಮ್ಲ ಅಥವಾ ಲವಣಗಳನ್ನು ನೀರಿನಂಥ ದ್ರವದಲ್ಲಿ ಬೆರೆಸಿ ಮಾಡಿದ ದ್ರಾವಣ 
ಉತ್ತರ:- ಇಲೆಕ್ಟ್ರೋಲೈಟ್
🌸ಘನ ರೂಪದ ರಾಸಾಯನಿಕಗಳನ್ನು ಪ್ರಯೋಗಿಸಿ ವಿವಿಧ ಆಕಾರ, ಗಾತ್ರಗಳಲ್ಲಿ ತಯಾರಿಸಿದ ಕೋಶಗಳಿಗೆ ಹೀಗೆ ಹೇಳುತ್ತಾರೆ
ಉತ್ತರ: - ಶುಷ್ಕ ಕೋಶಗಳು
🌸ತರಂಗ ದೂರಗಳಿಗೆ ಅನುಗುಣವಾಗಿ ಜೋಡಿಸಿದ ಪಟ್ಟಿಯನ್ನು ಹೀಗೆ ಕರೆಯುವರು
ಉತ್ತರ: - ವಿದ್ಯುತ್ಕಾಂತೀಯ ರೋಹಿತ
🌸ಕಡಿಮೆ ತರಂಗ ದೂರವುಳ್ಳ ಗಾಮಾ ತರಂಗಗಳನ್ನು ಉಪಯೋಗಿಸುವುದು
ಉತ್ತರ:- ಕ್ಯಾನ್ಸರ್ ಚಿಕಿತ್ಸೆಯಲ್ಲಿ
🌸ವೈಜ್ಞಾನಿಕ ಸಂಶೋಧನೆಯಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಮತ್ತು ವೈದ್ಯಕೀಯ ಉಪಯೋಗಿಸುವ ಕಿರಣ
 à²‰à²¤್ತರ:- ಎಕ್ಸ್ ಕಿರಣ(X-rays)
🌸ಧ್ವನಿಸಾಗಣೆ, ಟೆಲಿವಿಷನ್, ದೂರದರ್ಶಕ ಮತ್ತು ರೇಡಾರ್‌ಗಳನ್ನು ಉಪಯೋಗಿಸುವ ತರಂಗ
 à²‰à²¤್ತರ:- ರೇಡಿಯೋ ತರಂಗ
🌸ಭಾರವಾದ ಧಾತುಗಳು ತಾವಾಗಿ, ವಿಕಿರಣವನ್ನು ಉತ್ಸರ್ಜಿಸುತ್ತವೆ. ಇಂಥ ವಿದ್ಯುನ್ಮಾನಕ್ಕೆ ಹೀಗೆನ್ನುವರು 
ಉತ್ತರ: - ನೈಸರ್ಗಿಕ ವಿಕಿರಣ ಪಟುತ್ವ
🌸ಪೋಲೋನಿಯಂ ಮತ್ತು ರೇಡಿಯಂ ಎಂಬ ಎರಡು ಹೊಸ ವಿಕಿರಣಪಟು ಧಾತುಗಳನ್ನು ಆವಿಷ್ಕರಿಸಿದವರು
ಉತ್ತರ:- ಕ್ಯೂರಿ ದಂಪತಿಗಳು (1896 ಮತ್ತು 1898ರಲ್ಲಿ)

28-09-2024

logoblog

Thanks for reading General knowledge Question and Answers

Previous
« Prev Post

No comments:

Post a Comment

If You Have any Doubts, let me Comment Here